ಬೀದರ್, ಬಸವ ಕಲ್ಯಾಣ ಕ್ಷೇತ್ರಕ್ಕೆ ಭರ್ಜರಿ ಉಡುಗೊರೆ; ಪ್ರತಿ ಕ್ಷೇತ್ರಕ್ಕೆ 7500 ಮನೆಗಳ ನಿರ್ಮಾಣಕ್ಕೆ ಆದೇಶ
ದೇವರಾಜು ಅರಸು ವಸತಿ ಯೋಜನೆಯಡಿ 2500 ಮನೆ ಹಾಗೂ ಪಿಎಂ ಆವಾಜ್ ಯೋಜನೆಯಡಿ 5000 ಮನೆ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
news18-kannada Updated:November 24, 2020, 7:01 PM IST

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
- News18 Kannada
- Last Updated: November 24, 2020, 7:01 PM IST
ಬೆಂಗಳೂರು (ನ.24): ಇನ್ನೇನು ಶೀಘ್ರದಲ್ಲಿಯೇ ಮಸ್ಕಿ, ಬಸವ ಕಲ್ಯಾಣ ಉಪಚುನಾವಣೆ ಘೋಷಣೆಯಾಗಲಿದ್ದು, ಕ್ಷೇತ್ರದ ಮತದಾರರ ಓಲೈಕೆಗೆ ಈಗಾಗಲೇ ಬಿಜೆಪಿ ಮುಂದಾಗಿದೆ. ಇಲ್ಲಿನ ಲಿಂಗಾಯತ, ಮರಾಠ ಮತಗಳ ಸೆಳೆಯಲು ಈಗಾಗಲೇ ಮರಾಠ ಅಭಿವೃದ್ಧಿ ಪ್ರಾಧಿಕಾರ ಹಾಗೂ ಲಿಂಗಾಯತ-ವೀರಶೈವ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಈ ಬೆನ್ನಲ್ಲೇ ಈಗ ಬೀದರ್, ಬಸವ ಕಲ್ಯಾಣ ಕ್ಷೇತ್ರಕ್ಕೆ ಭರ್ಜರಿ ಉಡುಗೊರೆ ನೀಡಲು ಸರ್ಕಾರ ಮುಂದಾಗಿದೆ. ಪ್ರತಿ ಕ್ಷೇತ್ರಕ್ಕೆ 7500 ಮನೆಗಳ ನಿರ್ಮಾಣಕ್ಕೆ ಆದೇಶ ನೀಡಿದೆ. ದೇವರಾಜು ಅರಸು ವಸತಿ ಯೋಜನೆಯಡಿ 2500 ಮನೆ ಹಾಗೂ ಪಿಎಂ ಆವಾಜ್ ಯೋಜನೆಯಡಿ 5000 ಮನೆ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
ಈಗಾಗಲೇ ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣಾ ಗೆಲುವಿನಲ್ಲಿರುವ ಬಿಜೆಪಿಗೆ ಈ ಚುನಾವಣೆ ಕೂಡ ಪ್ರತಿಷ್ಠೆಯಾಗಿದೆ. ಈ ಹಿನ್ನಲೆ ಕ್ಷೇತ್ರದ ಮತದಾರರ ಓಲೈಕೆ ಸರ್ಕಾರ ಕಸರತ್ತು ನಡೆಸಿದೆ. ಇಲ್ಲಿನ ಪ್ರಾಬಲ್ಯ ಮತಗಳ ಸೆಳೆಯಲು ಈಗಾಗಲೇ ಪ್ರಾಧಿಕಾರ ರಚಿಸಿದ್ದು, ಈಗ ಉಳದ ಮತಗಳ ಸೆಳೆಯಲು ವಸತಿ ನಿರ್ಮಾಣ ಮಾಡಲು ಮುಂದಾಗಿದೆ. 
ಮಸ್ಕಿಗೆ ಪ್ರತಾಪ್ ಗೌಡ ಪಾಟೀಲ್ ಹೆಸರನ್ನು ಬಿಜೆಪಿ ಕೋರ್ ಕಮಿಟಿ ಸಭೆ ಹೈಕಮಾಂಡ್ಗೆ ಶಿಫಾರಸು ಮಾಡಲು ಪಕ್ಷ ನಿರ್ಧರಿಸಿದೆ. ಇನ್ನು ಬಸವಕಲ್ಯಾಣದಲ್ಲಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಎಂಬ ಚರ್ಚೆ ಮುಂದುವರೆದಿದೆ. ಬಸವಕಲ್ಯಾಣಕ್ಕೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಸ್ತುವಾರಿ ವಹಿಸಲು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ವಿಜಯೇಂದ್ರ ಅವರ ಉಸ್ತುವಾರಿಯಲ್ಲಿ ಕೆಆರ್ಪೇಟೆ, ಶಿರಾ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನಲೆ ಮಸ್ಕಿ ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡ ಕೂಡ ವಿಜಯೇಂದ್ರ ಅವರನ್ನೇ ನಮ್ಮ ಕ್ಷೇತ್ರಕ್ಕೂ ಚುನಾವಣಾ ಉಸ್ತುವಾರಿ ಮಾಡಿ ಎಂದು ಬೇಡಿಕೆ ಇರಿಸಿದ್ದಾರೆ
ಈಗಾಗಲೇ ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣಾ ಗೆಲುವಿನಲ್ಲಿರುವ ಬಿಜೆಪಿಗೆ ಈ ಚುನಾವಣೆ ಕೂಡ ಪ್ರತಿಷ್ಠೆಯಾಗಿದೆ. ಈ ಹಿನ್ನಲೆ ಕ್ಷೇತ್ರದ ಮತದಾರರ ಓಲೈಕೆ ಸರ್ಕಾರ ಕಸರತ್ತು ನಡೆಸಿದೆ. ಇಲ್ಲಿನ ಪ್ರಾಬಲ್ಯ ಮತಗಳ ಸೆಳೆಯಲು ಈಗಾಗಲೇ ಪ್ರಾಧಿಕಾರ ರಚಿಸಿದ್ದು, ಈಗ ಉಳದ ಮತಗಳ ಸೆಳೆಯಲು ವಸತಿ ನಿರ್ಮಾಣ ಮಾಡಲು ಮುಂದಾಗಿದೆ.

ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2020 -21 ನೇ ಸಾಲಿನಲ್ಲಿ ಮಂಜೂರು ಮಾಡಿರುವ 1,51,715 ಮನೆಗಳಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ 5000 ಮನೆ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ 5000 ಮನೆಗಳನ್ನು ಸೇರಿದಂತೆ ಒಟ್ಟು 10 ಸಾವಿರ ಮನೆಗಳನ್ನು ಮಂಜೂರು ಮಾಡಲು ಅನುಮತಿ ನೀಡಲಾಗಿದೆ.
ರಾಜ್ಯ ಸರ್ಕಾರದ ಯೋಜನೆಯಡಿ ಕೊಡುಗೆ
ಡಿ ದೇವರಾಜ ಅರಸು ವಸತಿ ಯೋಜನೆ ಅಡಿ ಅಲೆಮಾರಿ ಹಾಗೂ ಅರೆ ಅಲೆಮಾರಿ ವರ್ಗದವರಿಗೆ ಮನೆಗಳನ್ನು ಮಂಜೂರು ಮಾಡಲು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಗೆ ಅನುಮೋದನೆ ನೀಡಲಾಗಿದೆ. ಇದರ ಫಲವಾಗಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2500 ಮನೆ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ 2500 ಮನೆ ನಿರ್ಮಿಸುವ ಕಾರ್ಯಕ್ಕೆ ಅನುಮೋದನೆ ದೊರಕಿದೆ. ಎರಡು ಕ್ಷೇತ್ರಗಳ ಒಟ್ಟು 5000 ಫಲಾನುಭವಿಗಳು ಯೋಜನೆಯ ಅನುಕೂಲ ಪಡೆದು ಮನೆಗಳನ್ನು ಹೊಂದಲಿದ್ದಾರೆ. ಈಗಾಗಲೇ ಕೋವಿಡ್ ಸಂಕಷ್ಟ ಹಾಗೂ ನೆರೆ ಸಮಸ್ಯೆ ಇನ್ನೆಲೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯಾವುದೇ ಮನೆಗಳನ್ನು ನಿರ್ಮಿಸಿಕೊಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದರೆ ಉಪಚುನಾವಣೆಯಲ್ಲಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಸರ್ಕಾರ ಎರಡು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ಘೋಷಿಸಿದೆ.
ಮಸ್ಕಿಗೆ ಪ್ರತಾಪ್ ಗೌಡ ಪಾಟೀಲ್ ಹೆಸರನ್ನು ಬಿಜೆಪಿ ಕೋರ್ ಕಮಿಟಿ ಸಭೆ ಹೈಕಮಾಂಡ್ಗೆ ಶಿಫಾರಸು ಮಾಡಲು ಪಕ್ಷ ನಿರ್ಧರಿಸಿದೆ. ಇನ್ನು ಬಸವಕಲ್ಯಾಣದಲ್ಲಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಎಂಬ ಚರ್ಚೆ ಮುಂದುವರೆದಿದೆ. ಬಸವಕಲ್ಯಾಣಕ್ಕೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಸ್ತುವಾರಿ ವಹಿಸಲು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ವಿಜಯೇಂದ್ರ ಅವರ ಉಸ್ತುವಾರಿಯಲ್ಲಿ ಕೆಆರ್ಪೇಟೆ, ಶಿರಾ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನಲೆ ಮಸ್ಕಿ ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡ ಕೂಡ ವಿಜಯೇಂದ್ರ ಅವರನ್ನೇ ನಮ್ಮ ಕ್ಷೇತ್ರಕ್ಕೂ ಚುನಾವಣಾ ಉಸ್ತುವಾರಿ ಮಾಡಿ ಎಂದು ಬೇಡಿಕೆ ಇರಿಸಿದ್ದಾರೆ